ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಬರೆದು, ಸಾಲು ಸಾಲು ಕಾರಣಗಳನ್ನು ನೀಡಿದೆ.
ಸ್ಟಾಲಿನ್ ಗುಮಾರಂತೆ ಇರುವ ಕರ್ನಾಟಕ ಕಾಂಗ್ರೆಸ್ ನಾಯಕರು ಅವರ ಎದುರು ಮಾತನಾಡುವುದಕ್ಕೂ ಹೆದರಿ ಹೇಡಿಗಳಂತೆ ಇರುವುದಕ್ಕೆ ಕಾರಣಗಳು ಎಂದು ಬರೆದು, ಹಲವು ರೀತಿಯಲ್ಲಿ ವಾಗ್ದಾಳಿ ನಡೆಸಲಾಗಿದೆ. ಸ್ಟಾಲಿನ್ ಪರ ಪ್ರಚಾರ ಮಾಡಿದ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ತಮ್ಮ ಬುಡ ಅಲುಗಾಡಿಸಬಹುದೆಂಬ ಭಯ. ತಮಿಳುನಾಡಿನಲ್ಲಿ ಡಿಎಂಕೆ ಪರ ಪ್ರಚಾರ ಮಾಡಿದ ಡಿ.ಕೆ ಶಿವಕುಮಾರ್ ತಮ್ಮ ಸಾಮರ್ಥ್ಯ ಮಹಾತ್ವಾಕಾಂಕ್ಷೆಗಾಗಿ ಹೈಕಮಾಂಡ್ ಗೆ ನಿಯತ್ತು ತೋರಿಸಬೇಕಾಗಿದೆ.
ರಾಹುಲ್ ಸ್ನೇಹಿತ ಸ್ಟಾಲಿನ್ ಎದುರು ನಿಂತರ ಸಚಿವ ಸಂಪುಟದಲ್ಲಿ ತಮ್ಮ ತಮ್ಮ ಕುರ್ಚಿಗಳು ಉಳಿಯುವುದಿಲ್ಲವೆಂದು ನಮ್ಮ ಸಚಿವರುಗಳಿಗೆ ಭಯ. ಹೀಗೆ ಹಲವು ಕಾರಣಗಳು ಎಂದು ಹೇಳಿ ಸ್ಟಾಲಿನ್ ಗುಲಾಮರು ಅಂತಾ ಕಾಲೆಳೆದಿದ್ದಾರೆ.