ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ನಾಡಿನ ಹಲವು ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರಗಳು ಬರುತ್ತಿದ್ದವು. ಈ ಬಗ್ಗೆ ಅನೇಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಬೆದರಿಕೆ ಪತ್ರಗಳಿಂದ ಆತಂಕಕ್ಕೆ ಒಳಗಾದ ಸಾಹಿತಿಗಳು ಸಿಎಂಗೆ ಪತ್ರ ಬರೆದಿದ್ದರು. ಹೀಗಾಗಿ ಇದರ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಸಿಸಿಬಿ ಪೊಲೀಸರು ದಾವಣಗೆರೆ ಮೂಲದ ಶಿವಾಜಿರಾವ್ ಜಾಧವ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣ ತನಿಖೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು ಬೆದರಿಕೆ ಪತ್ರಗಳ ಮೂಲಕ ದಾವಣಗೆರೆ ಅನ್ನೋ ಮಾಹಿತಿ ಸಿಗುತ್ತೆ.
ಸಿಸಿಬಿ ಅಧಿಕಾರಿಗಳಿಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಅಲ್ಲಿ ಕಾರ್ಯಾಚರಣೆ ನಡೆಸುತ್ತಾರೆ. ಆಗ ಶಿವಾಜಿರಾವ್ ಜಾಧವ್ ಮೇಲೆ ಹೆಚ್ಚು ಅನುಮಾನಗಳು ಬರಲು ಶುರುವಾಗುತ್ತೆ. ಬೆದರಿಕೆ ಪತ್ರಗಳ ಹಿಂದೆ ಈತನದ್ದೇ ಕೈವಾಡ ಇರುವ ಸಾಧ್ಯತೆ ಹೆಚ್ಚಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.