ಚಿಕ್ಕಮಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ರು ಪ್ರಾಮಾಣಿಕವಾಗಿ ಕೆಲಸ ಮಾಡ್ಲಿ. ಆದ್ರೆ, ಇದರ ಜೊತೆಗೆ ಕೆಲ ಪೊಲೀಸರ ಬಗ್ಗೆ ಅನುಮಾನ ಮೂಡುತ್ತೆ ಅಂತಾ ಹೇಳಿದ್ದಾರೆ.
ತನಿಖೆ ವಿಳಂಬ ಮಾಡಿ, ಬೇರೆ ಕಥೆ ಸೃಷ್ಟಿಸುವ ಸಾಧ್ಯತೆಯಿದೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಂಬ್ ಇಟ್ಟವರನ್ನ ಪತ್ತೆ ಹಚ್ಚುವುದು ಕಷ್ಟದ ಕೆಲಸವೇನಲ್ಲ. ಸುತ್ತಲಿನ ಸಿಸಿಟಿವಿ ಚೆಕ್ ಮಾಡಿದ್ರೆ ಸಿಗುತ್ತೆ. ತಪ್ಪಿತಸ್ಥರನ್ನ ಪತ್ತೆ ಹಚ್ಚಲು ವಿಳಂಬ ಮಾಡದೆ, ಸತ್ಯಾಂಶವನ್ನ ಜನರ ಮುಂದೆ ಇಡಬೇಕು ಅಂತಾ ಹೇಳಿದ್ರು.
ನಿಮ್ಗೆ ಅಧಿಕಾರವಿದೆ. ಯಾವ ರೀತಿಯಾದ್ರೂ ತನಿಕೆ ಮಾಡಿ, ಆದ್ರೆ ಸಂಶಯ ಬರುವ ರೀತಿಯಲ್ಲಿ ಹೇಳಿಕೆ ನೀಡಬೇಡಿ ಎಂದರು. ತಮಗೆ ಕೆಲ ಪೊಲೀಸರ ಮೇಲೆ ಅನುಮಾನವಿದೆ ಅಂತಾ ಹೇಳಿರುವ ಹೆಚ್ಚಡಿಕೆ, ಸರ್ಕಾರ ಹಾಗೂ ಪೊಲೀಸ್ರು ಸಮಾಜ ಒಡೆಯುವ ಕೆಲಸ ಮಾಡಬಾರದು ಅಂತಾ ಹೇಳಿದ್ದಾರೆ.