ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೃದಯಾಘಾತದಿಂದ ನಿಧನ ಹೊಂದಿದ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆ ನಟನ ಅಂತಿಮ ವಿಧಿ ವಿಧಾನ ನಡೆಸಲು ನಿರ್ಧರಿಸಲಾಗಿದೆ.
ಚಿರಂಜೀವಿ ಕುಟುಂಬಸ್ಥರು ಚೆನ್ನೈನಲ್ಲಿದ್ದು, ಬೆಂಗಳೂರಿಗೆ ಆಗಮಿಸ್ತಿದ್ದಾರೆ. ಹೀಗಾಗಿ ನಾಳೆ ಬೆಳಗ್ಗೆ ಅಂತ್ಯಕ್ರಿಯೆ ನಡೆಸಲಾಗ್ತಿದೆ. ಇವರ ಇಡೀ ಕುಟುಂಬ ಕಲಾವಿದರು. ಅಜ್ಜ ಶಕ್ರಿಪ್ರಸಾದ ಕನ್ನಡ ಖ್ಯಾತ ಖಳನಟರು. ಇವರ ಮಗ ಅರ್ಜುನ ಸರ್ಜಾ ಸೌಥ್ ಸಿನಿ ದುನಿಯಾದ ಸ್ಟಾರ್ ನಟ. ಇವರ ಪತ್ನಿಯೂ ನಟಿಯಾಗಿದ್ದು, ಹಿರಿಯ ನಟ ರಾಜೇಶ ಅವರ ಮಗಳಾಗಿದ್ದಾರೆ. ಇನ್ನು ಚಿರು ಸಹೋದರ ಧ್ರುವ ಸರ್ಜಾ, ಪತಿ ಮೇಘನಾರಾಜ ಸಹ ಕಲಾವಿದರು. ಹೀಗೆ ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕುಟುಂಬವಿದು.
ಚಿರಂಜೀವಿ ಎಂದು ಹೆಸರು ಇಟ್ಟುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಹೋಗಿರುವುದು ಎಲ್ಲರ ದುಃಖಕ್ಕೆ ಕಾರಣವಾಗಿದೆ. ಇಡೀ ನಾಡಿನ ಜನತೆ ನಟನ ಸಾವಿಗೆ ಕಣ್ಣೀರು ಸುರಿಸ್ತಿದೆ. ಇವರ ಅಜ್ಜ ಶಕ್ತಿ ಪ್ರಸಾದ ಅವರ ಹುಟ್ಟೂರಾದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.