ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟರಾದ ಸುದೀಪ್, ದರ್ಶನ್ ನಡುವಿನ ಸ್ನೇಹ ಸಂಬಂಧ ಯಾಕೆ ಮುರಿದು ಬಿತ್ತು ಎನ್ನುವುದು ಅಭಿಮಾನಿಗಳ ಪ್ರಶ್ನೆ. ಅವಕಾಶ ಸಿಕ್ಕಾಗಲೆಲ್ಲ ನೀವಿಬ್ಬರು ಯಾವಾಗ ಒಂದಾಗುತ್ತೀರಿ ಎಂದು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಇದೀಗ ಮತ್ತೆ ಅದೇ ಪ್ರಶ್ನೆಯನ್ನು ನಟ ಸುದೀಪಗೆ ಕೇಳಲಾಗಿದೆ.
ಸರ್ ನಿಮ್ದು ಮತ್ತೆ ದರ್ಶನ್ ಅವರದ್ದು ಸಮಸ್ಯೆಯನ್ನು ಯಾವಾಗ ಬಗೆಹರಿಸಿಕೊಳ್ಳುತ್ತೀರಿ.. ಇನ್ನು ಎಷ್ಟು ಸಮಯ ತಗೋತೀರ ಎಂದು ಕೇಳಲಾಗಿದೆ. ಇದಕ್ಕೆ ನಟ ಸುದೀಪ್, ಸಮಸ್ಯೆ ಏನು ಅಂತ ಇಬ್ಬರು ಹುಡುಕುತ್ತಾ ಇದ್ದೀವಿ ಎಂದು ಹೇಳಿ ತಮಾಷೆಯ ಇಮೋಜಿ ಬಳಸಿದ್ದಾರೆ.
ದರ್ಶನ್ ಬಗ್ಗೆ ಒಂದು ಮಾತು ಹೇಳಿ ಎಂದು ಮತ್ತೊಬ್ಬರು ಕೇಳಿದ್ದಾರೆ. ನಾನು ಯಾವಾಗಲೂ ಅವರಿಗೆ ಒಳಿತನ್ನು ಹಾರೈಸುತ್ತೇನೆ ಎಂದಿದ್ದಾರೆ. ಈ ಮೂಲಕ ಎಲ್ಲೋ ಒಂದು ಅಭಿಮಾನಿಗಳಲ್ಲಿ ಆಸೆಯೊಂದನ್ನು ಹುಟ್ಟು ಹಾಕಿದ್ದಾರೆ ಎನಿಸುತ್ತಿದೆ.