ಬಾಲ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳ ಆಹ್ವಾನ

204

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಸಿಂದಗಿ: ಪಟ್ಟಣದ ವಿದ್ಯಾಚೇತನ ಪ್ರಕಾಶನ ಕೊಡಮಾಡುವ ಬಾಲಸಾಹಿತ್ಯ ಪುರಸ್ಕಾರಕ್ಕಾಗಿ 2023ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.

ಕಥೆ, ಕವನ ಹಾಗೂ ಕಾದಂಬರಿ ಈ ಮೂರು ಪ್ರಕಾರಗಳಲ್ಲಿ ರಚನೆಯಾದ ಮಕ್ಕಳ ಕೃತಿಗಳ ನಾಲ್ಕು ಪ್ರತಿಗಳನ್ನು ಕಳಿಸಬಹುದು. ಮಾರ್ಚ್ 31ರೊಳಗೆ ಪುಸ್ತಕಗಳನ್ನು ಕಳಿಸಬೇಕು. ಪ್ರಶಸ್ತಿಗೆ ಕಳಿಸಿದ ಪುಸ್ತಕಗಳನ್ನು ಹಿಂದುರುಗಿಸುವುದಿಲ್ಲ. ಹ.ಮ ಪೂಜಾರ, ನಿವೃತ್ತ ಶಿಕ್ಷಕರು, ಶ್ರೀ ಸಂಗಮೇಶ್ವರ ಕಾಲೋನಿ, ಸಿಂದಗಿ-586 128, ಜಿಲ್ಲಾ ವಿಜಯಪುರ ಈ ವಿಳಾಸಕ್ಕೆ ಕಳುಹಿಸಲು ತಿಳಿಸಲಾಗಿದೆ.

ಪ್ರಶಸ್ತಿಯು ಮೂರು ಪ್ರಕಾರಗಳಲ್ಲಿ ತಲಾ 5 ಸಾವಿರ ನಗದು, ಫಲಕ ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ 9448644228 ನಂಬರ್ ಗೆ ಸಂಪರ್ಕಿಸಲು ವಿದ್ಯಾಚೇತನ ಪ್ರಕಾಶನ ಪ್ರಕಟಣೆಯಲ್ಲಿ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!