ಪ್ರಜಾಸ್ತ್ರ ಸಿನಿಮಾ ಡೆಸ್ಕ್
ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಕನ್ನಡದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಅವರ ಮೃತದೇಹವನ್ನು ದಾನ ಮಾಡಲಾಯಿತು. ನಟಿಯ ಕುಟುಂಬಸ್ಥರು ಹಾಗೂ ಬಂಧು ಮಿತ್ರರು, ಚಿತ್ರರಂಗದವರು ಅಂತಿಮ ದರ್ಶನ ಪಡೆದ ನಂತರ ನೇತ್ರ ದಾನ ಹಾಗೂ ದೇಹ ದಾನ ಮಾಡಲಾಯಿತು.
ಸೇಂಟ್ ಜಾನ್ ಆಸ್ಪತ್ರೆಗೆ ಅವರ ದೇಹ ದಾನ ಮಾಡಲಾಯಿತು. ಮಗ, ನಟ ಪ್ರಕಾಶ್ ಬೆಳವಾಡಿ ಈ ಬಗ್ಗೆ ತಿಳಿಸಿದ್ದಾರೆ. ಅವರ ಆಸೆಯಂತೆ ಕಣ್ಣು ಹಾಗೂ ದೇಹದಾನ ಮಾಡಲಾಗಿದೆ ಎಂದರು. ಸ್ಯಾಂಡಲ್ ವುಡ್ ಖ್ಯಾತ ಮೇಕಪ್ ಕಲಾವಿದರಾಗಿದ್ದ ಮೇಕಪ್ ನಾಣಿ ಇವರ ಪತಿಯಾಗಿದ್ದಾರೆ. ಇವರ ಮಕ್ಕಳು, ಮೊಕ್ಕಳು ಸಹ ಕಲಾವಿದರು.