ನವದೆಹಲಿ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆಸ್ತಿರುವ ಪ್ರತಿಭಟನೆಗಳು ಮುಂದುವರೆದಿವೆ. ಶುಕ್ರವಾರ ತಡರಾತ್ರಿ ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ ಆಜಾದ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅವರನ್ನ ಬಂಧಿಸಲಾಗಿದೆ.
ದೆಹಲಿಯ ದರಿಯಾಗಂಜ್ ಪ್ರದೇಶದಲ್ಲಿ ಪೊಲೀಸರ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ಜಾಮೀಯಾ ಮಸೀದಿಗೆ ಪ್ರಾರ್ಥನೆಗೆ ಬಂದಿದ್ದ ಸುಮಾರು ಒಂದು ಸಾವಿರ ಜನ ವಾಪಸ್ ಮನೆಗೆ ಹೋಗದೆ ಜಂತರ್ ಮಂತರ್ ಕಡೆ ಸಾಗಿದ್ದಾರೆ. ಪೊಲೀಸ್ರು ಮನವಿ ಮಾಡಿದ್ರೂ ಅವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ಲಘು ಲಾಠಿ ಪ್ರಹಾರ ನಡೆದಿದೆ.
ಲಘು ಲಾಠಿ ಪ್ರಹಾರದ ವೇಳೆ ಚಂದ್ರಶೇಖರ ಆಜಾದ್ ತಪ್ಪಿಸಿಕೊಂಡಿದ್ರು. ಬಳಿಕ ತಡರಾತ್ರಿ ಮತ್ತೆ ಪ್ರತಿಭಟನೆ ಶುರು ಮಾಡಿದ್ದಾರೆ. ಹೀಗಾಗಿ ಇಂದು ಮುಂಜಾನೆ 40ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆಯಲಾಗಿದೆ.