ಬೆಳಗಾವಿ: ಲಾಕ್ ಡೌನ್ ಬಂದೋಬಸ್ತಿ ಕೆಲಸಕ್ಕಾಗಿ ಬೈಕ್ ಮೇಲೆ ಬರ್ತಿದ್ದ ಪಿಎಸ್ಐ, ಅಡ್ಡ ಬಂದ ನಾಯಿಯನ್ನ ಉಳಿಸಲು ಬೈಕ್ ಸ್ಕಿಡ್ ಆಗಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಪಿಎಸ್ಐ ಮನೋಹರ ಗಣಾಚಾರಿ ಎಂಬುವರು ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ತಾಲೂಕಿನ ಯಳ್ಳೂರು ಗ್ರಾಮದಿಂದ ಖಡೇಬಜಾರ್ ಪೊಲೀಸ್ ಠಾಣಗೆ ಬೈಕ್ ಮೇಲೆ ಬರ್ತಿದ್ದಾರೆ. ಕೆಎಲ್ಇ ಆಸ್ಪತ್ರೆ ಸಮೀಪ ಬಂದಾಗ ನಾಯಿ ಅಡ್ಡ ಬಂದಿದ್ದಕ್ಕೆ ಬೈಕ್ ಸೈಡ್ ತೆಗೆದುಕೊಳ್ಳುವಷ್ಟರಲ್ಲಿ ಸ್ಕಿಡ್ ಆಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಮನೋಹರ ಗಣಾಚಾರಿ ಅವರು ಕಳೆದ 6 ತಿಂಗಳ ಹಿಂದೆಯಷ್ಟೆ ಪಿಎಸ್ಐ ಆಗಿ ಬಡ್ತಿ ಹೊಂದಿದ್ರು. ಮುಂದಿನ ಸೆಪ್ಟೆಂಬರ್ ನಲ್ಲಿ ನಿವೃತ್ತಿಯಾಗುವರಿದ್ರು. ಅಷ್ಟರಲ್ಲಿ ಈ ದುರಂತ ಸಂಭವಿಸಿದೆ.