ಪ್ರಜಾಸ್ತ್ರ ಸುದ್ದಿ
ವಿಜಯಪುರ: ದೋಣಿ ನದಿ ಮೇಲಿನ ಸೇತುವೆ ಅಂದಾಜು 15 ಮೀಟರ್ ನಷ್ಟು ಭಾಗ ಕುಸಿದಿದ್ದು, ಇದರ ಮೇಲೆ ಸಂಚಾರಕ್ಕೆ ಸೋಮವಾರ ಸಂಜೆಯಿಂದಲೇ ನಿರ್ಬಂಧ ಹೇರಲಾಗಿದೆಯಂತೆ. ಇದರಿಂದಾಗಿ ಹೂವಿನಹಿಪ್ಪರಗಿ, ಮಿಣಜಗಿ ಹಾಗೂ ತಾಳಿಕೋಟೆ ಪ್ರವೇಶ ಮಾಡುವ ರಸ್ತೆ ಬಂದ್ ಆದಂತಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.