ಪ್ರಜಾಸ್ತ್ರ ಸುದ್ದಿ
ಮೈಸೂರು: ಮೇ 6ರ ಬುದ್ಧ ಪೂರ್ಣಿಮೆ ಪ್ರಯುಕ್ತ ತನುಮನ ಸಂಸ್ಥೆ, ಮೈಸೂರು ವತಿಯಿಂದ, ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಸಾರಥ್ಯದಲ್ಲಿ ಜಗನಡೆಯಲಿ ಬುದ್ಧನ ಕಡೆ ಸಂಗೀತ ಕಾರ್ಯಕ್ರಮ ಹಾಗೂ ಬುದ್ಧ ನಾಡಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ.
ನಗರದ ವಿಶ್ವಮೈತ್ರಿ ಬುದ್ಧವಿಹಾರ ಸಭಾ ಭವನದಲ್ಲಿ ಮೇ 6, ಶನಿವಾರ ಸಂಜೆ 5.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಕನ್ನಡಪ್ರಭ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಪಿಎಂಸಿ ಮಾಜಿ ಉಪಾಧ್ಯಕ್ಷ ಚಿಕ್ಕಜವರಪ್ಪನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಮಹಾಪೌರರಾದ ಪುರುಷೋತ್ತಮರವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಕರ್ನಾಟಕ ದಲಿತ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷ ಹಿನಕಲ್ ಸೋಮಣ್ಣ, ಮಂಡ್ಯದ ಭಾರತೀಯ ಬೌದ್ಧಮಹಾಸಭಾದ ಪ್ರಧಾನಕಾರ್ಯದರ್ಶಿ ಎಸ್.ಪಿ ನಾರಾಯಣಸ್ವಾಮಿ, ಮೈಸೂರಿನ ಸೆಂಟ್ ಮೇರಿಯಸ್ ಆಸ್ಪತ್ರೆಯ ಮನಃಶಾಸ್ತ್ರಜ್ಞ ಡಾ.ಎಚ್.ಎಸ್ ಮಲ್ಲೇಶ್, ಮೈಸೂರಿನ ಪ್ರತಿಕ್ಷಾ ಫೈನಾನ್ಸಿಯಲ್ ಸಲ್ಯೂಷನ್ ನ ಚನ್ನವಡೆಯನಪುರ ಸಿದ್ದರಾಜು, ಕರ್ನಾಟಕ ಭೀಮ ಸೇನಾ ಮೈಸೂರು ಜಿಲ್ಲಾ ಕಾರ್ಯದರ್ಶಿ ಎಂ.ಮಂಜುನಾಥ, ಯುವ ಮುಖಂಡ ಎಸ್.ಸಂತೋಷಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.