ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಚಿತ್ರದುರ್ಗದ ಮಾಜಿ ಸಚಿವರೊಬ್ಬರ ಹೆಸರು ಕೇಳಿ ಬರ್ತಿದೆ. ಯುವತಿಗೆ ಹಣ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯೂರು ಮಾಜಿ ಸಚಿವ ಡಿ.ಸುಧಾಕರ, ಇದಕ್ಕೂ ನನಗೂ ಸಂಬಂಧವಿಲ್ಲ. ನಿತ್ಯ ಸಾವಿರಾರು ಕಾಲ್ ಗಳು ಬರುತ್ತವೆ. ಅದೆ ರೀತಿ ನಾನು ಮಾತ್ನಾಡಿರಬಹುದು. ಆದ್ರೆ, ಯಾರೊಂದಿಗೂ ಹಣದ ವ್ಯವಹಾರ ಇಟ್ಟುಕೊಂಡಿಲ್ಲವೆಂದು ಹೇಳಿದ್ದಾರೆ.
ಸಿಡಿ ಪ್ರಕರಣದಲ್ಲಿ ಯುವತಿಯೊಂದಿಗೆ ಹಣದ ವ್ಯವಹಾರವಿಲ್ಲ. ನನಗೆ ಎಸ್ಐಟಿ ನೋಟಿಸ್ ಸಹ ಕೊಟ್ಟಿಲ್ಲ. ಒಂದು ವೇಳೆ ಕರೆದ್ರೆ ಹೋಗುತ್ತೇನೆ. ನನ್ಗೆ ಭಯ ಇದ್ದಿದ್ರೆ ಕೋರ್ಟ್ ನಲ್ಲಿ ಇಂಜೆಕ್ಷನ್ ಆರ್ಡರ್ ತರುತ್ತಿದೆ. ಡಿಕೆ ಶಿವಕುಮಾರ, ಸಿದ್ದರಾಮಯ್ಯ ನನ್ಗೆ ಮೊದಲಿನಿಂದಲೂ ಪರಿಚಯ. ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಅಂತಾ ಹೇಳಿದ್ದಾರೆ.