25-30 ನಕ್ಸಲರು ಹತ್ಯೆ

229

ಪ್ರಜಾಸ್ತ್ರ ಸುದ್ದಿ

ಛತ್ತೀಸಗಡ: ನಕ್ಸಲ್ ನಿಗ್ರಹ ಚಟುವಟಿಕೆಯಲ್ಲಿ 22 ಜನ ಯೋಧರು ಭಾನುವಾರ ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ವ್ಯಾಪಕ ಆಕ್ರೋಶ ನಡುವೆ 25-30 ಜನ ನಕ್ಸಲರು ಹತ್ಯೆಯಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸಿಆರ್ ಪಿಎಫ್ ನ ಮಹಾನಿರ್ದೇಶಕ ಕಲದೀಪ ಸಿಂಗ್ ತಿಳಿಸಿದ್ದಾರೆ. ನಕ್ಸಲ್ ಕಾರ್ಯಾಚರಣೆಯಲ್ಲಿ ಭದ್ರತಾ ವೈಫಲ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮೃತ ಹಾಗೂ ಗಾಯಾಳು ನಕ್ಸಲರನ್ನು ಸಾಗಿಸಲು ಮೂರು ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದ್ರೆ, 25-30 ಜನರು ಮೃತಪಟ್ಟಿರಬಹುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!