ಪ್ರಜಾಸ್ತ್ರ ಸುದ್ದಿ
ಪುತ್ತೂರು: ಕಾರು ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಉರ್ಲಾಂಡಿ ಬೈಪಾಸ್ ಹತ್ತಿರ ನಡೆದಿದೆ. ಕಾರು, ಮಾರುತಿ ಸ್ವಿಫ್ಟ್, ಆಟೋ ರಿಕ್ಷಾ, ಸ್ಕೂಟರ್ ನಡುವೆ ಸರಣಿ ಅಪಘಾತ ನಡೆದಿದೆ.
ಕಾರೊಂದು ಆಟೋಗೆ ಡಿಕ್ಕಿಯಾದ ಬಳಿಕ ಉಳಿದ ಎರಡು ವಾಹನಗಳಿಗೆ ಡಿಕ್ಕಿಯಾಗಿದೆ. ಇದ್ರಿಂದಾಗಿ ನಾಲ್ಕು ಜನರು ಗಾಯಗೊಂಡಿದ್ದಾರೆ. ಇದಕ್ಕೆ ಕಾರು ಚಾಲಕನ ನಿರ್ಲಕ್ಷ್ಯ ಕಾರಣ. ಆತ ಕುಡಿದು ವಾಹನ ಚಲಾವಣೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾರು ಚಾಲಕ ಪ್ರದೀಪ ಶೆಟ್ಟಿ ವಿರುದ್ಧ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಾಗಿದೆ.