ಸಿಂದಗಿ: ಖ್ಯಾತ ಹಿರಿಯ ಸಂಶೋಧಕ ನಾಡೋಜ ಡಾ.ಎಂ ಚಿದಾನಂದಮೂರ್ತಿ ಅವರ ನಿಧನಕ್ಕೆ ತಾಲೂಕು ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ. ಹಿರಿಯ ಸಂಶೋಧಕರಿಗೆ ಪಟ್ಟಣದ ಸಾಹಿತ್ಯ ಪರಿಷತ್ ಸಭಾಭವನದಲ್ಲಿ, ಕಸಾಪ ತಾಲೂಕಾ ಅಧ್ಯಕ್ಷ ಸಿದ್ದಲಿಂಗ ಚೌಧರಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯ್ತು.
ಮೌನಚಾರಣೆ ಮೂಲಕ ನಾಡಿನ ಹಿರಿಯ ಸಂಶೋಧಕರಿಗೆ ನಮನ ಸಲ್ಲಿಸಲಾಯ್ತು. ಈ ವೇಳೆ ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಮಸಾಪ ಅಧ್ಯಕ್ಷ ಅಶೋಕ ಬಿರಾದಾರ, ರಾಗ ರಂಜನಿಯ ನಿರ್ದೇಶಕ ಡಾ.ಪ್ರಕಾಶ, ಸಾಹೇಬಣ್ಣ ದೇವರಮನಿ, ಪವನ ಕುಲ್ಕರ್ಣಿ, ಮಹಾಂತೇಶ ನೂಲನವರ, ಲಕ್ಷ್ಮಿಕಾಂತ ನಿಂಬಾಳ, ಜಗದೀಶ ಹಾಲ್ದಮಠ, ಸಂಜೀವ, ಅನ್ನಪೂರ್ಣ ಹೋಟಗಾರ ಸೇರಿದಂತೆ ಅನೇಕರು ಭಾಗವಹಿಸಿದ್ರು.