ನಾಳೆ ಬಜೆಟ್ ಮಂಡನೆ: ಜನರ ನಿರೀಕ್ಷೆ ತಲುಪುತ್ತಾ ಸರ್ಕಾರ?

99

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ತಮ್ಮ ಸರ್ಕಾರದ ಮೊದಲ ಬಜೆಟ್ ಮಂಡಿಸಲಿದ್ದಾರೆ. ಇದು ಅವರ ರಾಜಕೀಯ ಜೀವನದ 14ನೇ ಬಜೆಟ್ ಮಂಡನೆಯಾಗಲಿದೆ. 5 ಗ್ಯಾರೆಂಟಿ ಯೋಜನೆಗಳ ಜೊತೆಗೆ ಇನ್ನು ಹಲವು ಹೊಸ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ.

ತಾವು ಬಡವರ, ಮಧ್ಯಮ ವರ್ಗದ ಜನರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರದ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಮೀಸಲು ಅನ್ನೋ ಕುತೂಹಲ ಮೂಡಿದೆ. ಕಾರ್ಮಿಕರು, ರೈತರು, ಮಹಿಳೆಯರು, ವಿದ್ಯಾರ್ಥಿನಿಯರು, ಯುವ ಪಡೆ, ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಜನರ ನಿರೀಕ್ಷೆ ಬೆಟ್ಟದಷ್ಟಿದೆ.

ಈ ಬಜೆಟ್ ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ಯಾಕಂದರೆ 3 ಲಕ್ಷ ಕೋಟಿಗೂ ಅಧಿಕ ಮೊತ್ತದ ಬಜೆಟ್ ನಲ್ಲಿ ಯಾರಿಗೆಲ್ಲ ಎಷ್ಟು ಸವಲತ್ತುಗಳು ಸಿಗುತ್ತವೆ ಎಂದು ಕಾಯುತ್ತಿದ್ದಾರೆ. ಹೀಗಾಗಿ ಇದು ಜನಪ್ರಿಯ ಜನಪರ ಬಜೆಟ್ ಆಗುತ್ತಾ, ಲೋಕಸಭಾ ಚುನಾವಣೆ ದೃಷ್ಟಿಯ ಬಜೆಟ್ ಆಗುತ್ತಾ ಅನ್ನೋದಕ್ಕೆ ನಾಳೆ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!