ಪ್ರಜಾಸ್ತ್ರ ಸುದ್ದಿ
ಕಾರವಾರ: ಕರಾವಳಿ ಭಾಗದಲ್ಲಿ ಭರ್ಜರಿಯಾಗಿ ಮಳೆ ಸುರಿಯುತ್ತಿದೆ. ಸತತವಾಗಿ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮೂಡಲಮಕ್ಕಿ ಬಳಿ ಸೇತುವೆ ಸಂಪರ್ಕ ಕಳೆದುಕೊಂಡ ಜನರು ಪರದಾಡುತ್ತಿದ್ದಾರೆ.
ಮೂಡಲಮಕ್ಕಿ, ಒಕ್ಕಲಕೇರಿ, ಬಿಣಗಾ, ಅರಗಾ ನೌಕಾನೆಲೆಯ ಸುತ್ತಮುತ್ತ ಸಂಪೂರ್ಣ ಜಲಾವೃತಗೊಂಡಿದೆ. ಇದೇ ರೀತಿ ದೋಭಿಘಾಟ, ಹಬ್ಬುವಾಡ ಸೇರಿ ಅನೇಕ ಕಡೆ ಮಳೆನೀರು ಆವರಿಸಿಕೊಂಡಿದೆ. ಈಗಾಗ್ಲೇ ಅನೇಕ ಮನಗಳಿಗೆ ನೀರು ನುಗ್ಗಿವೆ. ಕೆಲವು ಕಡೆ ಗುಡ್ಡ ಕುಸಿತ ಸಹ ನಡೆದಿದೆ. ಮುಂಜಾಗ್ರತ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.