ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈಶ್ವರಪ್ಪ ಫೋಟೋ ಇರುವ ನೋಟಿನ ಚಿತ್ರದಲ್ಲಿ ಭ್ರಷ್ಟ ಜನತಾ ಪಕ್ಷ ಅಂದರೆ ಕುದುರೆ ವ್ಯಾಪರ ಎಂದಿದೆ. ಆಪರೇಷನ್ ಕಮಲ ಕರೆನ್ಸಿ ಎಂದು ಟೀಕಿಸಿದೆ.
ಈಶ್ವರಪ್ಪನವರು ಕಾಂಗ್ರೆಸ್ ಶಾಸಕರಿಗೆ 500 ಕೋಟಿ ಆಮಿಷ ಒಡ್ಡಿದ್ದೆ ಎಂದು ಹೇಳಿರುವುದರಲ್ಲಿ ಯಾವ ಆಶ್ಚರ್ಯ, ಅನುಮಾನವಿಲ್ಲ. ತೆಲಂಗಾಣದಲ್ಲಿ 150 ಕೋಟಿಯ ಡೀಲ್ ನಲ್ಲೂ ನಿಮ್ಮದೇ ನೋಟು ಎಣಿಸುವ ಮಿಷನ್ ಕೆಲಸ ಮಾಡಿತ್ತೆ ಈಶ್ವರಪ್ಪನವರೇ ಎಂದು ಪ್ರಶ್ನಿಸಿದೆ.
ಅಲ್ಲದೇ ಶೇಕಡ 40ರಷ್ಟು ಕಮಿಷನ್ ಲೂಟಿಯನ್ನು ಕರ್ನಾಟಕದ ನಂತರ ತೆಲಂಗಾಣದಲ್ಲಿ ಇನ್ವೆಸ್ಟ್ ಮಾಡ್ತಿದೀರಾ ಎಂದು ಕೇಳುವ ಮೂಲಕ ಬಿಜೆಪಿ ಹಾಗೂ ಈಶ್ವರಪ್ಪನವರನ್ನು ತಿವಿಯಲಾಗಿದೆ.