ಬಾಕಿ ಬಿಲ್ ಗಾಗಿ ಧರಣಿ ಸತ್ಯಾಗ್ರಹ

226

ಪ್ರಜಾಸ್ತ್ರ ಸುದ್ದಿ

ಸಿಂದಗಿ: 14ನೇ ಹಣಕಾಸು ಯೋಜನೆ ಅಡಿಯಲ್ಲಿ ಈ ಹಿಂದೆ ದೇವರನಾವದಗಿ ಹಾಗೂ ಕುಮಸಗಿ ಗ್ರಾಮಗಳಲ್ಲಿ ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿದ್ದು, ಬಾಕಿ ಉಳಿದಿರುವ ಬಿಲ್ ನೀಡುತ್ತಿಲ್ಲವೆಂದು ಹೇಳಿ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶಿವಶಂಕರ ಸಾಹೇಬಗೌಡ ಬಿರದಾರ ಎಂಬುವರು ಧರಣಿ ನಡೆಸಿದ್ದಾರೆ. ತಾಲೂಕು ಪಂಚಾಯ್ತಿ ಗೇಟ್ ಹತ್ತಿರ ಜನವರಿ 31ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದಾರೆ.

2018-19ನೇ ಸಾಲಿನ 14ನೇ ಹಣಕಾಸು ಕಾಮಗಾರಿಗಳ ಕ್ರಿಯಾಯೋಜನೆ ಪ್ರಕಾರ ಕಾಮಗಾರಿಗಳನ್ನು ಸಂಪೂರ್ಣ ಮಾಡಿದ್ದೇನೆ. ಆದರೆ, ಕೆಲಸ ಮಾಡಿದ ಕೆಲವೊಂದು ಬಿಲ್ ಗಳನ್ನು ಕೊಟ್ಟಿರುವುದಿಲ್ಲವೆಂದು ಧರಣಿ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಹ ಸಲ್ಲಿಸಿದ್ದಾರೆ. ಇದೆ ರೀತಿ ಅನೇಕರ ಬಿಲ್ ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!