ಪ್ರಜಾಸ್ತ್ರ ಸುದ್ದಿ
ಮೈಸೂರು: ಸಮಾಜ ಒಡೆಯುವ ಕೆಲಸ ಮಾಡಿಬೇಡಿ ಎಂದೆ ವಿವಾದ ಮಾಡಿದ್ರು. ಗೋ ಮಾಂಸ ಅವರವರ ಹಕ್ಕು ಎಂದೆ ವಿವಾದ ಮಾಡಿದ್ರು. ನಾನು ಹಳ್ಳಿ ಭಾಷೆಯಲ್ಲಿ ಮಾತ್ನಾಡುತ್ತೇನೆ. ಅದನ್ನೆ ಆರ್ ಆರ್ ಎಸ್ ನವರು ಬಣ್ಣ ಹಚ್ಚುತ್ತಾರೆ. ಹೀಗಾಗಿ ಅತಿ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಒಂದು ಹಸು, ಎಮ್ಮೆ ಸಾಕಲು ದಿನಕ್ಕೆ 7 ಕೆಜಿ ಮೇವು ಬೇಕು. ಇದಕ್ಕಾಗಿ ತಿಂಗಳಿಗೆ 3 ಸಾವಿರ ರೂಪಾಯಿ ಖರ್ಚಾಗುತ್ತೆ. ಇದನ್ನ ನಾನು ಹೇಳುತ್ತೇನೆ. ಇದನ್ನೇ ವಿವಾದ ಮಾಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.