ಮಂಡ್ಯ: ಕೋವಿಡ್ 19 ಪರೀಕ್ಷೆ ನಡೆಸದಂತೆ ವಿಧಾಸ ಪರಿಷತ್ ಜೆಡಿಎಸ್ ಸದಸ್ಯರೊಬ್ಬರು ಕಿರಿಕ್ ಮಾಡಿದ್ದಾರೆ. ಬೆಂಬಲಿಗರನ್ನ ಕರೆದುಕೊಂಡು ಬಂದು ಕಿರಿಕ್ ಮಾಡಿರುವ ಘಟನೆ ನಡೆದಿದೆ.
ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರಿಗೆ ಕೋವಿಡ್ 19 ಟೆಸ್ಟ್ ನಡೆಸಲಾಗ್ತಿದೆ. ಭವನದ ಬಳಿಯೇ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ನಡೆಸೋದು ಬೇಡವೆಂದು ಕಿರಿಕ್ ಮಾಡಿದ್ದಾರೆ. ತಮ್ಮ ಬೆಂಬಲಿಗರನ್ನ ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ.
ಇಷ್ಟು ಮಾತ್ರವಲ್ಲದೆ, ಎಂಎಲ್ ಸಿ ಕೆ.ಟಿ ಶ್ರೀಕಂಠೇಗೌಡ ಅವರ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಮಾಧ್ಯಮದವರಿಗೆ ಅಂಬೇಡ್ಕರ್ ಭವನದಲ್ಲಿ ಕರೋನಾ ಟೆಸ್ಟ್ ಮಾಡದಂತೆ ಗಲಾಟೆ ಆರಂಭಿಸಿ ಹಲ್ಲೆ ನಡೆಸಿದ್ದು, ಎಂಎಲ್ ಸಿ ಪುತ್ರನನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.
ಪತ್ರಕರ್ತರು ಸಹ ಕರೋನಾ ವಾರಿಯರ್ಸ್ ಎಂದು ಹೇಳಲಾಗುತ್ತೆ. ಅವರಿಗೆ ಕರೋನಾ ಟೆಸ್ಟ್ ನಡೆಸ್ತಿದ್ರೆ, ಅದಕ್ಕೆ ಅಡ್ಡಿ ಪಡಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಇವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.