ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಯರಗಲ್ ಬಿ.ಕೆ ಹತ್ತಿರದ ಯುಕೆಪಿ ಕ್ಯಾಂಪ್ ಸಮೀಪದ ಹನುಮಾನ ಮಂದಿರದಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಅಂದಾಜು 55-60 ವರ್ಷದ ವ್ಯಕ್ತಿಯ ಮೃತದೇಹವಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗ್ರಾಮದ ಸುತ್ತಮುತ್ತ ಭಿಕ್ಷೆ ಬೇಡಿಕೊಂಡು ತಿರುಗಾಡುತ್ತಿದ್ದನಂತೆ. ಆದರೆ, ಕಳೆದ ಎರಡು ಮೂರು ದಿನಗಳ ಹಿಂದೆ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮೇದಯ ಶವದ ವಾರಸುದಾರರ ಪತ್ತೆ ಕಾರ್ಯ ನಡೆದಿದೆ.