ಡಿಜೆ ಹಳ್ಳಿ ಪ್ರಕರಣ: ಮಾಜಿ ಕಾರ್ಪೂರೇಟರ್ ಅರೆಸ್ಟ್

249

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಆಗಸ್ಟ್ 11ರ ರಾತ್ರಿ ನಗರದ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಮಾಜಿ ಕಾರ್ಪೂರೇಟರ್ ನನ್ನ ಬಂಧಿಸಲಾಗಿದೆ. ಬುಧವಾರ ತಡರಾತ್ರಿ ಮಾಜಿ ಕಾರ್ಪೂರೇಟರ್ ಜಾಕೀರನನ್ನ ಬಂಧಿಸಲಾಗಿದೆ.

ಘಟನೆ ನಡೆದ ಮೇಲೆ ಒಂದು ಬಾರಿ ವಿಚಾರಣೆಗೆ ಹಾಜರಾಗಿದ್ದ ಜಾಕೀರ ನಂತರ ತಲೆ ಮರೆಸಿಕೊಂಡಿದ್ದ. ಮಾಜಿ ಮೇಯರ್ ಸಂಪತರಾಜ ಹಾಗೂ ಇವನ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು. ರಾಜಕೀಯ ವೈಷಮ್ಯದಿಂದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!