ಜಮೀರ ಮೊದಲು ಬಿಎಸ್ವೈ ಮನೆ ಮುಂದೆ ವಾಚ್ ಮನ್ ಆಗಲಿ: ರೋಷನ ಬೇಗ್

302

ಪ್ರಜಾಸ್ತ್ರ ಪಾಲಿ‘ಟ್ರಿಕ್ಸ್’

ಬೆಂಗಳೂರು: ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಸಚಿವರಾದ ಜಮೀರ ಅಹ್ಮದ ಹಾಗೂ ರೋಷನ ಬೇಗ್ ನಡುವೆ ಮಾತಿನ ಫೈಟ್ ನಡೆದಿದೆ. ಬಿಎಸ್ವೈ ಸಿಎಂ ಆದ್ರೆ ನಾನು ವಾಚ್ ಮನ್ ಆಗ್ತೀನಿ ಅಂದಿದ್ರು. ಜಮೀರ ಮೊದಲು ಯಡಿಯೂರಪ್ಪ ಮನೆ ಮುಂದೆ ವಾಚ್ ಮನ್ ಆಗಲಿ ಎಂದು ರೋಷನ ಬೇಗ್ ಕಿಡಿ ಕಾರಿದ್ದಾರೆ.

ನಾನು ಹೋರಾಟದ ಮೂಲಕ ರಾಜಕೀಯಕ್ಕೆ ಬಂದವನು. ಜಮೀರ ಯಾರೆಂದು ನಾನು ಉತ್ತರ ಕೊಡಲಿ. ಗಲಾಟೆಯಲ್ಲಿ ಕೆಲವರು ಅಮಾಯಕರು ಇರಬಹುದು. ಅವರನ್ನ ಬಿಡಲು ಹೇಳಿದ್ದೇನೆ. ಆದ್ರೆ, ಅಮಾಯಕರಂದ್ರೆ ಗೋರಿಪಾಳ್ಯ, ಕಲಾಸಿಪಾಳ್ಯದಿಂದ ಯಾಕೆ ಬಂದು ಗಲಾಟೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ನನಗೂ ಎಸ್ ಡಿಪಿಐಗೂ ಸಂಬಂಧವಿಲ್ಲ. ಇದರಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರೋಷನ ಬೇಗ್ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಲಿ ಅವರಿಗೆ ಟಿಕೆಟ್ ಸಿಕ್ಕರೂ ಸಿಗಬಹುದು ಎಂದು ಜಮೀರ ಅಹ್ಮದ ಕಿಡಿ ವ್ಯಂಗ್ಯವಾಡಿದ್ರು. ಇದಕ್ಕೆ ಬೇಗ್ ಪ್ರತ್ಯುತ್ತರ ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!