ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮೈಸೂರು: ಸಂದೇಶ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ ಲಂಕೇಶ ಆರೋಪ ಮಾಡಿದ್ದಾರೆ. ಇದರ ತನಿಖೆಗೆ ಗೃಹ ಸಚಿವರ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರು ಆದೇಶಿಸಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ನಗರದಲ್ಲಿ ಸಂದೇಶ ಪ್ರಿನ್ಸ್ ಹೋಟೆಲ್ ಗೆ ದೇವರಾಜ ಉಪವಿಭಾಗದ ಎಸಿಪಿ ಶಶಿಧರ ನೇತೃತ್ವದ ಟೀಂ ಭೇಟಿ ನೀಡಿದೆ. ಇಂದ್ರಜಿತ ಹೇಳಿರುವ ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗ್ತಿರುವ ಗಂಗಾಧರ ವಿಚಾರಣೆ ನಡೆಸಿದ್ದಾರೆ. ಅಂದು ಹೋಟೆಲ್ ನಲ್ಲಿ ಏನು ನಡೆಯಿತು ಅನ್ನೋದರ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ.