ಜೆಡಿಎಸ್ ಹೆಬ್ಬಟ್ಟು ಪಕ್ಷ: ಸಚಿವ ಆರ್.ಅಶೋಕ್

135

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ, ಬೊಮ್ಮಾಯಿ ಹೆಬ್ಬಟ್ಟು ಮುಖ್ಯಮಂತ್ರಿ ಎಂದು ಕಿಡಿ ಕಾರಿದ್ದರು. ಇದಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದು, ಜೆಡಿಎಸ್ ಹೆಬ್ಬಟ್ಟು ಪಕ್ಷ. ನಮ್ಮದು ರಾಷ್ಟ್ರೀಯ ಪಕ್ಷ ಎಂದರು.

ಇಂದಿಗೂ ದೇವೇಗೌಡರು, ಮುಂದೇನೂ ದೇವೇಗೌಡರು. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪಕ್ಷ ನಮ್ಮದಲ್ಲ. ನಮ್ಮಲ್ಲಿ ವಾಜಪೇಯಿ, ಅಡ್ವಾಣಿ, ಮೋದಿ ಇದ್ದಾರೆ. ಬೊಮ್ಮಾಯಿ ಅವರು ಇಂಜಿನಿಯರ್ ಓದಿದ್ದಾರೆ. ಜೆ.ಎಚ್ ಪಟೇಲ್, ರಾಮಕೃಷ್ಣ ಹೆಗಡೆ, ದೇವೇಗೌಡರ ಬಳಿ ತರಬೇತಿ ಪಡೆದಿದ್ದಾರೆ. ಅವರ ಸರಳ ಮುಖ್ಯಮಂತ್ರಿ ಅಂತಾ ಪ್ರತ್ಯುತ್ತರ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!