ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ತಂದೆಯೊಬ್ಬ ಮಗನಿಗೆ ಥಿನ್ನರ್ ಎರಚಿ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಮಗ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಏಪ್ರಿಲ್ 1ರಂದು ಆಜಾದ್ ನಗರದಲ್ಲಿ ಈ ಘಟನೆ ನಡೆದಿತ್ತು.
ಅರ್ಪಿತ್ ಅನ್ನೋ ಯುವಕ ಮೃತ ದುರ್ದೈವಿ. ಇವನ ತಂದೆ ಸುರೇಂದ್ರ ಬೆಂಕಿ ಹಚ್ಚಿದ್ದ. ಚಾಮರಾಜಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಬಿಲ್ಡಿಂಗ್ ಪ್ಯಾಬ್ರಿಕೇಷನ್ ಉದ್ಯಮ ನಡೆಸುತ್ತಿದ್ದ ಸುರೇಂದ್ರ ಎಂಬಾತ ತನ್ನ ಮಗ ಅರ್ಪಿತನಿಗೆ ವ್ಯವಹಾರ ನೋಡಿಕೊಳ್ಳಲು ಕೊಟ್ಟಿದ್ದ. ಆದರೆ, ವ್ಯವಹಾರದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ತಂದೆ ಹಾಗೂ ಮಗನ ನಡುವೆ ಏಪ್ರಿಲ್ 1ರಂದು ಗೋದಾಮಿನಲ್ಲಿ ಜಗಳವಾಗಿದೆ.
ಲೆಕ್ಕ ಕೊಟ್ಟರೂ ಸಾಯಿಸ್ತಿಯಾ ಕೊಡದಿದ್ದರೂ ಸಾಯಿಸ್ತಿಯಾ. ನಾನು ಲೆಕ್ಕ ಕೊಡಲ್ಲ. ಸಾಯಿಸು ನೋಡೋಣ ಎಂದು ಅರ್ಪಿತ್ ಹೇಳುತ್ತಿದ್ದಂತೆ, ಸುರೇಂದ್ರ ಗೋದಾಮು ಬಳಿಯ ರಸ್ತೆ ಮಧ್ಯದಲ್ಲಿ ಥಿನ್ನರ್ ಎರೆಚಿ ಬೆಂಕಿ ಹಚ್ಚಿದ್ದಾನೆ. ಘಟನೆ ತಿಳಿದು ಪರಿಚಯಸ್ಥರು ಅರ್ಪಿತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಅರ್ಪಿತ್ ಇಂದು ಮೃತಪಟ್ಟಿದ್ದಾನೆ. ಅರ್ಪಿತ್ ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.