ಸಿಂದಗಿಯಲ್ಲಿ ಇಬ್ಬರಿಂದ ನಾಮಪತ್ರ ವಾಪಸ್

204

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಸಂಬಂಧ ನಾಮಪತ್ರ ಸಲ್ಲಿಸಿದವರಲ್ಲಿ ಇಬ್ಬರು ವಾಪಸ್ ಪಡೆದುಕೊಂಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಮೀರಮಜಾ ಚೌದರಿ ಹಾಗೂ ಅಕ್ಬರ್ ಖಾಜಾಸಾಬ ಮುಲ್ಲಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ.

ಅಶೋಕ ಮನಗೂಳಿ-ಕಾಂಗ್ರೆಸ್, ದಸ್ತಗೀರ ಮುಲ್ಲಾ-ಬಿಎಸ್ಪಿ,  ರಮೇಶ ಭೂಸನೂರ-ಬಿಜೆಪಿ, ಮುರಿಗೆಪ್ಪಗೌಡ ರದ್ದೇವಾಡಗಿ-ಆಪ್, ವಿಶಾಲಾಕ್ಷಿ ಪಾಟೀಲ-ಜೆಡಿಎಸ್, ಪುಂಡಲಿಕ ಬಿರಾದಾರ-ಕೆಆರ್ ಎಸ್, ಜಿಲಾನಿ ಮುಲ್ಲಾ-ಪಕ್ಷೇತರ(ಆಟೋ ರಿಕ್ಷಾ), ದೀಪಿಕಾ.ಎಸ್-ಪಕ್ಷೇತರ(ಫೋನ್ ಚಾರ್ಜರ್) ಹಾಗೂ ಮೊಹಮ್ಮದಮುಶ್ತಾಕ ನಾಯ್ಕೋಡಿ-ಪಕ್ಷೇತರ(ಹೆಲಿಕಾಪ್ಟರ್) ಈ 9 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ಮೇ 10ರಂದು ಮತದಾನ ನಡೆಯಲಿದೆ. ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.




Leave a Reply

Your email address will not be published. Required fields are marked *

error: Content is protected !!