ಪ್ರಜಾಸ್ತ್ರ ಸುದ್ದಿ
ತುಮಕೂರು: ಬಿಜೆಪಿ ಮಾಜಿ ಶಾಸಕ ಸುರೇಶಗೌಡ ವಿರುದ್ಧ ತುಮಕೂರು ಗ್ರಾಮಾಂತರ ಶಾಸಕ ಬಿ.ಸಿ ಗೌರಿಶಂಕರ್ ಎಫ್ಐಆರ್ ದಾಖಲಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಕೊಲೆ ಆರೋಪಿ, ಜೀವ ಬೆದರಿಕೆ ಆರೋಪ ಮಾಡಿದ್ದಾರೆ ಎಂದು ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೈಲಿನಲ್ಲಿರುವ ಸುಜಯ್ ಭಾರ್ಗವ್ ಗೆ 5 ಕೋಟಿ ರೂಪಾಯಿ ಸುಪಾರಿ ಕೊಟ್ಟಿದ್ದೇನೆ ಎಂದು ಸುಳ್ಳು ಕೊಲೆ ಆರೋಪ ಮಾಡಿದ್ದಾರೆ. ಸುರೇಶಗೌಡ ಹೇಳಿಕೆಯಿಂದ ನನಗೆ ಜೀವ ಬೆದರಿಕೆ ಶುರುವಾಗಿದೆ ಎಂದು ಶಾಸಕ ಗೌರಿಶಂಕರ್ ದೂರು ದಾಖಲಿಸಿದ್ದಾರೆ.