ಬೇಸಿಗೆಯಲ್ಲಿ ಮೈಕಾಂತಿ ಕಾಪಾಡಿಕೊಳ್ಳಲು ಹೀಗೆ ಮಾಡಿ

406

ಇನ್ನೇನು ಬೇಸಿಗೆ ಕಾಲ ಶುರುವಾಗ್ತಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೂರ್ಯನ ಬಿಸಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಹೀಗಾಗಿ ಝಳದಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುವುದು ಸಾಮಾನ್ಯ. ಇದರ ಜೊತೆಗೆ ದೇಹದ ಕಾಂತಿಯನ್ನ ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ.

ಬೇಸಿಗೆಯಲ್ಲಿ ಹೆಚ್ಚೆಚ್ಚು ದ್ರವ ಪದಾರ್ಥಗಳನ್ನ ಸೇವಿಸಬೇಕು. ಹೆಚ್ಚು ನೀರು, ಎಳೆನೀರು ಕುಡಿಯಬೇಕು. ಕಿತ್ತಳೆ ಹಣ್ಣು, ನಿಂಬೆಹಣ್ಣಿನ ಜ್ಯೂಸ್ ಸೇವಿಸಬೇಕು. ಎಣ್ಣೆ ಪದಾರ್ಥಗಳಿಂದ ದೂರು ಉಳಿಯಬೇಕು. ಆಗ ಮುಖ ಸುಕ್ಕುಗಟ್ಟುವುದಿಲ್ಲ. ಅಲ್ದೇ, ಸೂರ್ಯನ ಕಿರಣಗಳಿಂದ ಮುಖ ಕಪ್ಪಾಗದಂತೆ ನೋಡಿಕೊಳ್ಳಬಹುದು.

ಇನ್ನು ನೈಸರ್ಗಿಕವಾಗಿ ಸಿಗುವ ಆಯಂಟಿ ಟ್ಯಾನ್ ಪೀಲ್ ಆಫ್ ಮಾಸ್ಕ್ ಬಳಸಬಹುದು. ಕಿತ್ತಳೆ ಬಣ್ಣದ ಮಾಸ್ಕ್ ಇದ್ರೆ ಇನ್ನು ಬೆಸ್ಟ್. ಇದು ಚರ್ಮಕ್ಕೆ ಒಂದೇ ರೀತಿಯಾದ ಬಣ್ಣವನ್ನ ನೀಡುತ್ತೆ. ಇವುಗಳ ಜೊತೆಗೆ ಜೇನುತುಪ್ಪು ಸೇವನೆಯಿಂದ ಬ್ಯಾಕ್ಟೇರಿಯಾಯಿಂದ ಮುಕ್ತಿ ಪಡೆಯಬಹುದು.




Leave a Reply

Your email address will not be published. Required fields are marked *

error: Content is protected !!