ಪ್ರಜಾಸ್ತ್ರ ಸುದ್ದಿ
ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಸಂಜೆ 7ಗಂಟೆಗೆ 2ನೇ ಟಿ-20 ಪಂದ್ಯ ನಡೆಯಲಿದೆ. ಆದರೆ, ಈ ಪಂದ್ಯಕ್ಕೆ ಮಳೆ ಕಾಟ ಶುರುವಾಗುವ ಲಕ್ಷಣಗಳು ಕಂಡು ಬಂದಿವೆ. ಈಗಾಗ್ಲೇ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಆದರೆ, ವಾತಾವರಣ ಕ್ರಿಕೆಟ್ ಪ್ರೇಮಿಗಳ ಆಸೆಗೆ ಭಂಗ ತರುವಂತಿದೆ.
ಈ ಹಿಂದೆ ಜನವರಿ 5, 2020ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯವೂ ಮಳೆಯಿಂದ ರದ್ದಾಗಿದೆ. ಕೋವಿಡ್ ಕಾರಣಕ್ಕೆ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿರಲಿಲ್ಲ. ಹೀಗಾಗಿ ಇಂದಿನ ಪಂದ್ಯ ವೀಕ್ಷಿಸಲು ಜನರು ಕಾಯುತ್ತಿದ್ದಾರೆ. ಭಾನುವಾರವಾಗಿರುವುದರಿಂದ ಜನರು ಕ್ರೀಡಾಂಗಣದತ್ತ ಬರಲಿದ್ದಾರೆ.
ಗುವಾಹಟಿಯ ಬರ್ಸಾಪರಾ ಸ್ಟೇಡಿಯಂ 39 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ, ವಾತಾವರಣ ಮಳೆಯ ಸುರಿಯುವ ಮುನ್ಸೂಚನೆ ನೀಡಿದೆ. ಈಗಾಗ್ಲೇ ಪಿಚ್ ಗಳಿಗೆ ಕವರ್ ಹೊದಿಸಲಾಗಿದೆ.