ಸಿಂದಗಿಗೆ ಆಗಮಿಸಿದ ಜೆಡಿಎಸ್ ಜನತಾ ಜಲಧಾರೆ

262

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆ ಭಾನುವಾರ ಸಿಂದಗಿಗೆ ಆಗಮಿಸಿತ್ತು. ಇಂಡಿ ಮಾರ್ಗವಾಗಿ ಗಾಂಧಿ ಸರ್ಕಲ್ ಗೆ ಆಗಮಿಸಿದ ರಥಯಾತ್ರೆಯನ್ನು ತಾಲೂಕಾಧ್ಯಕ್ಷ ಗೊಲ್ಲಾಳಪ್ಪಗೌಡ ಪಾಟೀಲ, ಶಿವಾನಂದ ಪಾಟೀಲ ಸೇರಿದಂತೆ ಅನೇಕರು ಸ್ವಾಗತಿಸಿದರು.

ನಂತರ ಡೊಳ್ಳಿನ ನಾದದೊಂದಿಗೆ ಕುಂಭ ಹೊತ್ತ ಮಹಿಳೆಯರೊಂದಿಗೆ ಅಂಬೇಡ್ಕರ್ ಸರ್ಕಲ್, ಅಂಬಿಗೇರ ಚೌಡಯ್ಯ ಸರ್ಕಲ್ ಮಾರ್ಗವಾಗಿ ಬಸವೇಶ್ವರ ಸರ್ಕಲ್ ವರೆಗೂ ಮೆರವಣಿಗೆ ನಡೆಸಲಾಯಿತು. ಮುಂದೆ ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ರಥಯಾತ್ರೆ ಸಾಗಿತು.

ಈ ವೇಳೆ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯಕದರ್ಶಿ ಅರವಿಂದ ಹಂಗರಗಿ, ದೇವರಹಿಪ್ಪರಗಿ ತಾಲೂಕಾಧ್ಯಕ್ಷ ಸಾಯಿಬಣ್ಣ ಬಿರಾದಾರ, ಸಲೀಂ ಜುಮನಾಳ, ಝುಲ್ಫಿಕರ ಅಂಗಡಿ, ಶರಣು ಧರಿ, ಎಸ್.ಬಿ ಪಾಟೀಲ ಸೇರಿದಂತೆ ಅನೇಕರಿದ್ದರು.




Leave a Reply

Your email address will not be published. Required fields are marked *

error: Content is protected !!