ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಗ್ರಾಹಕರಿಂದ ವಂಚಿಸಿರುವ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಕಣ್ವ ಗ್ರೂಪ್ ಗೆ ಸಂಬಂಧಿಸಿದಂತೆ 426 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನ ಜಪ್ತಿ ಮಾಡಿದ್ದಾರೆ.
ಈಗಾಗ್ಲೇ ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಡಯ್ಯನನ್ನ ಇಡಿ ಅಧಿಕಾರಿಳು ಅರೆಸ್ಟ್ ಮಾಡಿದ್ದಾರೆ. ಇಡಿ ಈತನ ಆಸ್ತಿ ಜಪ್ತಿ ಮಾಡಿದೆ. ಇದೀಗ ಸಿಐಡಿ ಕಣ್ವ ಗೂಪ್ ನ ಬಹುಕೋಟಿ ವಂಚನೆ ಸಂಬಂಧ 426 ಕೋಟ ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಿದೆ.