ಯಾವನೋ ತಲೆ ಕೆಟ್ಟ ಈಶ್ವರಪ್ಪ: ಡಿ.ಕೆ ಶಿವಕುಮಾರ್

215

ಪ್ರಜಾಸ್ತ್ರ ಸುದ್ದಿ

ಗದಗ: ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಸಚಿವ ಕೆ.ಎಸ್ ಈಶ್ವರಪ್ಪ, ಮುಂದೊಂದು ದಿನ ಕೆಂಪುಕೋಟೆ ಮೇಲೆ ಭಗವಧ್ವಜ ಹಾರಿಸಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಯಾವನೋ ತಲೆ ಕೆಟ್ಟ ಈಶ್ವರಪ್ಪ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಸಂದರ್ಭ ಬರುತ್ತೆ ಅಂತಾನೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ 10 ನಿಮಿಷದಲ್ಲಿ ಅವನು ರಾಜೀನಾಮೆ ಪಡೆಯುತ್ತಿದ್ದವಿ ಎಂದರು.

ಶಾಸಕರಾಗಿ, ಸಚಿವರಾಗಿ ಏನೆಂದು ಪ್ರಮಾಣ ಸ್ವೀಕರಿಸಿದ್ದೀವಿ ಅನ್ನೋ ಪರಿಜ್ಞಾನವಿಲ್ಲ. ಸಿಎಂ ಬೊಮ್ಮಾಯಿ ಬಾಯಿಗೆ ಹೊಲಗೆ ಹಾಕಿಕೊಂಡು ಕುಂತಿದ್ದಾರೆ. ಇನ್ನು ಪೊಲೀಸರು ಸಹ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಹೊರತು ಸರ್ಕಾರಿ ನೌಕರರಂತೆ ಅಲ್ಲವೆಂದು ಕಿಡಿ ಕಾರಿದರು.




Leave a Reply

Your email address will not be published. Required fields are marked *

error: Content is protected !!