ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಭಟ್ಕಳ: ಕನ್ನಡ ಚಿತ್ರರಂಗಕ್ಕೆ ಕರೋನಾಗಿಂತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ದೊಡ್ಡ ಹೊಡೆತ ನೀಡಿದೆ. ಆ ನೋವಿನಿಂದ ಇನ್ನು ಹೊರ ಬರಲು ಆಗಿಲ್ಲವೆಂದು ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಹೇಳಿದರು.
ಕಿಸ್ ಮತ್ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಮಾತನಾಡಿದ ಅವರು, ಅಪ್ಪು ನಿಧನ ಚಿತ್ರರಂಗಕ್ಕೆ ದೊಡ್ಡ ಹೊಡೆತ. ಅವರ ದರ್ಶನಕ್ಕೆ ಎಲ್ಲೆಡೆಯಿಂದ ಅಭಿಮಾನಿಗಳು, ಇತರೆ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು ಬರುತ್ತಿದ್ದಾರೆ. ಇದು ಅವರ ಜನಪ್ರಿಯತೆಗೆ ಸಾಕ್ಷಿ ಎಂದರು.
ಇನ್ನು ಥಿಯೇಟರ್ ನಲ್ಲಿ ಶೇಕಡ 100ರಷ್ಟು ಭರ್ತಿಗೆ ಅವಕಾಶ ನೀಡಿದ್ದು ಖುಷಿಯ ವಿಚಾರ. ಕನ್ನಡಿಗರು ಸಿನಿಮಾ ನೋಡುವ ಮೂಲಕ ಕಲಾವಿದರನ್ನು ಬೆಳೆಸಬೇಕು ಎಂದರು.