ಭಾರತ-ಆಫ್ರಿಕಾ ಪಂದ್ಯ: ಶಾಕ್ ಕೊಟ್ಟ ಕೇರಳ ವಿದ್ಯುತ್ ಮಂಡಳಿ

192

ಪ್ರಜಾಸ್ತ್ರ ಕ್ರೀಡಾ ಸುದ್ದಿ

ತಿರುವನಂತಪುರಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿ ನಾಳೆ ಇಲ್ಲಿನ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ, ಇದೀಗ ಸ್ಟೇಡಿಯಂನಲ್ಲಿ ವಿದ್ಯುತ್ ಸಮಸ್ಯೆಯ ಶಾಕ್ ಹೊಡೆದಿದೆ. ಬಹು ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿರುವ ಹೊತ್ತಿನಲ್ಲಿ, ಕೇರಳ ವಿದ್ಯುತ್ ಮಂಡಳಿ ಶಾಕ್ ನೀಡಿದೆ.

ಹೌದು, ಗ್ರೀನ್ ಫೀಲ್ಡ್ ಸ್ಟೇಡಿಯಂ ಕೇರಳ ಸ್ಪೋರ್ಟ್ಸ್ ಫೆಸಿಲಿಟಿ ಒಡೆತನದಲ್ಲಿದೆ. ಕೇರಳ ಕ್ರಿಕೆಟ್ ಅಸೋಸಿಯೇಷನ್ ಇದನ್ನು ಬಾಡಿಗೆ ಪಡೆಯುತ್ತಿದೆ. ಆದರೆ, ಸ್ಟೇಡಿಯಂ ಬರೋಬ್ಬರಿ 2.5 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಸ್ಟೇಡಿಯಂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ.

ಪಂದ್ಯ ರಾತ್ರಿ ಹೊತ್ತಿನಲ್ಲಿ ನಡೆಯುವುದರಿಂದ ವಿದ್ಯುತ್ ಇಲ್ಲದೆ ಆಡಲು ಸಾಧ್ಯವೇ ಇಲ್ಲ. ಹೀಗಾಗಿ ಪಂದ್ಯ ಮುಗಿದ ಬಳಿಕ ಬಾಕಿ ಬಿಲ್ ನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಕೆಸಿಎ ಭರವಸೆ ನೀಡಿದ್ದು, ಯಾವುದೇ ಸಮಸ್ಯೆಯಾಗಲ್ಲ ಎನ್ನಲಾಗುತ್ತಿದೆ. ಈಗಾಗ್ಲೇ ಎರಡು ತಂಡಗಳು ತಿರುವನಂತಪುರಂಗೆ ಬಂದಿದ್ದು, ಘಟನೆಯಿಂದಾಗಿ ಕೆಸಿಎ ಮುಜುಗರಕ್ಕೆ ಒಳಗಾಗಿದೆ.




Leave a Reply

Your email address will not be published. Required fields are marked *

error: Content is protected !!