ಮರಾಠ ಮಹಾಸಂಘದಿಂದ ಮತ್ತೆ ಪುಂಡಾಟ

167

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಬರೀ ಕ್ಯಾತೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಿದ್ರೂ ಮಹಾರಾಷ್ಟ್ರದ ಡಿಸಿಎಂ ಫಡ್ನಾವಿಸ್ ಸೇರಿ ಸಚಿವರು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಪರಿಣಾಮ ಕರ್ನಾಟಕದ ಬಸ್ ಗಳಿಗೆ ಪುಣೆಯಲ್ಲಿ ಕಪ್ಪು ಬಣ್ಣ ಬಳಿಯುವ ಕೆಲಸ ಮಾಡಲಾಗಿದೆ.

ಮರಾಠ ಮಹಾಸಂಘ, ಕೆಎಸ್ಆರ್ ಟಿಸಿಯ ನಿಪ್ಪಾಣಿ-ಔರಂಗಾಬದ್ ಬಸ್ ಗೆ ಕಪ್ಪು ಬಣ್ಣ ಬಳಿದಿದೆ. ಜೈ ಮಹಾರಾಷ್ಟ್ರ, ಜಾಹಿರ್ ನಿಷೇಧ್ ಅನ್ನೋ ಪದಗಳನ್ನು ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ. ರಾಜ್ಯ ಹಾಗೂ ಮಹಾರಾಷ್ಟ್ರದ ನಡುವೆ ಸಂಚರಿಸುವ ಬಸ್ ಗಳಿಗೆ ಈ ರೀತಿ ಬರೆಯುವ ಮೂಲಕ ಪುಂಡಾಟ ಮೆರೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!