ನೋಡ್ ನೋಡ್ತಿದ್ದಂತೆ ನೇಣು ಹಾಕಿಕೊಂಡ

318

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನೋಡ್ ನೋಡ್ತಿದ್ದಂತೆ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡ ಘಟನೆ ಸಿಲಿಕಾನ್ ಸಿಟಿಯ ಮಂಜುನಾಥ ನಗರದಲ್ಲಿ ನಡೆದಿದೆ. 28 ವರ್ಷದ ಅನಿಲ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.

ಅನಿಲ ಆತ್ಮಹತ್ಯೆ ಮಾಡಿಕೊಳ್ಳಬೇಡ. ನಿನ್ನೊಂದಿಗೆ ನಾವು ಇದ್ದೇವೆ. ಬಾಗಿಲು ತೆಗಿ ಎಂದು ಮನೆಯವರು, ಅಕ್ಕಪಕ್ಕದವರು ಎಷ್ಟೇ ಬಾಗಿಲು ಬಡೆದರು. ಬಾಗಿಲು ತೆಗಿಯಲಿಲ್ಲ. ಕಿಟಕಿಯಿಂದಲೇ ನೇಣು ಹಾಕಿಕೊಳ್ಳುವುದನ್ನು ನೋಡುತ್ತಲೇ ಇರುವಾಗ್ಲೇ ಅನಿಲ ಎಂಬಾತ ಸಾವಿಗೆ ಶರಣಾಗಿದ್ದಾನೆ.

ಮುಂಬೈನಲ್ಲಿ ವಾಸವಾಗಿದ್ದ ಅನಿಲ ಹೆಂಡ್ತಿಯ ಜೊತೆ ಜಗಳ ಮಾಡಿಕೊಂಡಿದ್ದನಂತೆ. ಇದೆ ವಿಚಾರಕ್ಕೆ ಬೆಂಗಳೂರಿಗೆ ಬಂದಿದ್ದ. ಅಲ್ದೇ, ಕುಡಿದ ಮತ್ತಿನಲ್ಲಿದ್ದಾಗ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗ್ತಿದೆ. ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!