ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿರುವ ಉಪ ನೋಂದಣಿ ಕಚೇರಿಯ ಮೇಲೆ ಮಂಗಳವಾರ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಡಿಸಿಪಿ ಅರುಣ್ ನಾಯಕ್, ಸಿಪಿಐ ಆನಂದ್ ಟಕ್ಕನವರ್ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಹಾಗೂ ಅಲ್ಲಿನ ಸಿಬ್ಬಂದಿಗಳ ವಿಚಾರಣೆ ನಡೆಸಿದರು. ಈ ವೇಳೆ ರೈತರು ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡಿದರು. ಲಂಚ ತೆಗೆದುಕೊಂಡರೂ ಕೆಲಸ ಮಾಡಿಕೊಡುತ್ತಿಲ್ಲವೆಂದು ಆರೋಪಿಸಿದ್ದಾರೆ.
ಇದೆ ವೇಳೆ ಬಾಂಡ್ ರೈಟರ್ ಗಳ ಲೈಸನ್ಸ್ ಪರಿಶೀಲನೆ ನಡೆಸಿದರು. ಅನೇಕರು ಲೈಸನ್ಸ್ ಬಿಟ್ಟು ಬಂದಿರುವುದು, ಲೈಸನ್ಸ್ ರಿನಿವಲ್ ಮಾಡದೆ ಇರುವವರ ವಿರುದ್ಧ ಕಿಡಿ ಕಾರಿದರು.