ಕೋಮು ಭಾವನೆ ಸೃಷ್ಟಿಸುವ ಸೂಲಿಬೆಲೆ ಆಟ ನಡೆಯದು: ಎಂಬಿಪಿ

175

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಸರ್ವಾಧಿಕಾರಿ ಸರ್ಕಾರ ಎಂದು ಟೀಕಿಸಿದ್ದ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಸಚಿವ ಎಂ.ಬಿ ಪಾಟೀಲ ತಿರುಗೇಟು ನೀಡಿದ್ದು, ಕೋಮು ಭಾವನೆ ಸೃಷ್ಟಿಸುವ ಸೂಲಿಬೆಲೆ ಆಟ ಇನ್ನು ನಡೆಯದು ಎಂದಿದ್ದಾರೆ.

ಹಿಜಾಬ್, ಹಲಾಲ್, ಉರಿಗೌಡ, ನಂಜೇಗೌಡ ಎಂದು ಸಮಾಜದಲ್ಲಿ ಕೋಮು ಸಂಘರ್ಷಮಯ ವಾತಾವರಣ ನಿರ್ಮಿಸಿತು. ರಾಜ್ಯದ ಅಭಿವೃದ್ಧಿ ಕಡೆಗಣಿಸಿತು. ಇದರಿಂದ ರೋಸಿಹೋದ ರಾಜ್ಯದ ಮತದಾರ ಮಾಧ್ಯಮಗಳ ನಿರೀಕ್ಷೆಯನ್ನು ಸಹ ಹುಸಿಗೊಳಿಸಿದರು. ಕಾಂಗ್ರೆಸ್ ಸರ್ಕಾರ ರಚನೆಗೆ ಆಶೀರ್ವಾದ ಮಾಡಿದರು ಅಂತಾ ಹೇಳಿದರು.

ಶಾಲಾ ಪಠ್ಯಪುಸ್ತಕಗಳಲ್ಲಿ ಆರ್ ಎಸ್ಎಸ್, ಬಿಜೆಪಿ ಅಜೆಂಡಾ ನಿರ್ಮಿಸಲು ಹೋಗಿದ್ದರು. ನಮ್ಮ ಸರ್ಕಾರ ಇದನ್ನು ತೆಗೆದು ಹಾಕುತ್ತೆ. ಬಸವಣ್ಣ, ಚೆನ್ನಮ್ಮ, ಪುಲೆ ಅವರಂತವರ ವಿಷಯವನ್ನು ಪಠ್ಯದಲ್ಲಿ ಸೇರಿಸುತ್ತೇವೆ. ಅಹಿಂದ ಸಂಘಟನೆ ಬೇಡಿಕೆ ಈಡೇರಿಸುವ ಕುರಿತು ಚರ್ಚಿಸುತ್ತೇವೆ ಎಂದರು.




Leave a Reply

Your email address will not be published. Required fields are marked *

error: Content is protected !!