ವರ್ಗಾವಣೆ ವಿಚಾರಕ್ಕೆ ಸಚಿವ-ಶಾಸಕ ನಡುವೆ ಭರ್ಜರಿ ಗಲಾಟೆ

332

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸೌಧ ಕ್ಯಾಂಟೀನ್ ನಲ್ಲಿ ಸಚಿವ ಹಾಗೂ ಶಾಸಕರ ನಡುವೆ ಭರ್ಜರಿ ಗಲಾಟೆ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆಯಂತೆ. ಕಡೂರು‌ ಶಾಸಕ ಬೆಳ್ಳಿ ಪ್ರಕಾಶ ಹಾಗೂ ಸಚಿವ ನಾರಾಯಣ ಗೌಡ ನಡುವೆ ಗಲಾಟೆ ನಡೆದಿದೆ.

ಕ್ಷೇತ್ರದ ಅನುದಾನದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹಾಗೂ ಶಾಸಕರ ನಡುವೆ ಗಲಾಟೆಯಾಗಿದೆಯಂತೆ. ಶಾಸಕ ಹಾಗೂ ಸಚಿವರ ನಡುವೆ ನಡೆದ ಗಲಾಟೆಯಲ್ಲಿ ಏನಂದ್ರು ಅನ್ನೋದು ಇಲ್ಲಿದೆ ನೋಡಿ..

ಶಾಸಕ ಬೆಳ್ಳಿ ಪ್ರಕಾಶ: ನನ್ನ ಕ್ಷೇತ್ರದ ಕೆಲಸ ಮಾಡಿಕೊಡದವ ನೀನು ಎಂಥಾ ಸಚಿವ..

ಸಚಿವ ನಾರಾಯಣಗೌಡ: ಆಫೀಸ್ ಗೆ ಬಂದು ಮಾತಾಡು. ಇಲ್ಲಿ ಹೀಗೆ ಮಾತಾಡೋದಲ್ಲ. ಮೊದಲು ಮಾಸ್ಕ್ ಹಾಕೊಂಡು ಮಾತಾಡು..

ಬೆಳ್ಳಿ ಪ್ರಕಾಶ್: ಮಾಸ್ಕ್ ಹಾಕೊಳ್ಳೋದು ನನಗೆ ಗೊತ್ತು. ನಿನ್ನ ಆಫೀಸ್ ಗೆ ಏನ್ ಬರೋದು ಶಾ..!

ನಾರಾಯಣಗೌಡ: ಸರಿಯಾಗಿ ಮಾತಾಡು. ಇಲ್ಲಿ ಹೀಗೆಲ್ಲ ಮಾತಾಡ್ತಿಯ. ನಾನೊಬ್ಬ ಸಚಿವ. ನನಗೂ ಮಾತಾಡೊಕೆ ಬರುತ್ತೆ..

ಇದು ನಾಯಕರಿಬ್ಬರು ಆಡಿರುವ ಮಾತುಗಳು. ಅಸಲಿಗೆ ಇದು ಟ್ಟಾನ್ಸಫರ್ ವಿಚಾರಕ್ಕೆ ಗಲಾಟೆ ನಡೆದಿದೆಯಂತೆ. ಕ್ಷೇತ್ರಕ್ಕೆ ಸಂಬಂಧಿಸಿದ ಟ್ರಾನ್ಸ್‌ಫರ್ ಫೈಲ್ ಕ್ಲಿಯರ್ ಮಾಡ್ಬೇಕು ಎಂದು ನಾಲ್ಕು ತಿಂಗಳಿಂದ ಕಡೂರು ಶಾಸಕ ಬೆಳ್ಳಿ ಪ್ರಕಾಶ ಕೇಳ್ತಿದ್ರಂತೆ. ಸಿಎಂ ಸಹಿ ಮಾಡಿಸಿಕೊಟ್ಟಿದ್ರೂ ಸಚಿವರು ಕ್ಲಿಯರ್ ಮಾಡಿಲ್ಲವೆಂತೆ. ಹೀಗಾಗಿ ಇಬ್ಬರ ನಡುವೆ ಮುನಿಸು ಇದ್ದು, ಇದೆ ಗಲಾಟೆಗೆ ಕಾರಣವೆಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!