ಶಾಸಕ ಯತ್ನಾಳಗೆ ಕೊಲೆ ಬೆದರಿಕೆ: ಪ್ರಧಾನಿ ಕಚೇರಿಗೆ ದೂರು

382

ಪ್ರಜಾಸ್ತ್ರ ಸುದ್ದಿ

ವಿಜಯಪುರ: ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನ ಹತ್ಯೆ ಮಾಡುತ್ತೇನೆ ಎಂದು ಹಾಡುಹಗಲೇ ಕಡಿದು ಬೆದರಿಕೆ ಹಾಕಲಾಗಿದೆ. ಗೋಲಗುಮ್ಮಟ ಪೊಲೀಸ್ ಠಾಣಾ ಆವರಣದಲ್ಲಿ ರಾಘು ಕಣಮೇಶ್ವರ ಎಂಬುವರು ಬೆದರಿಕೆ ಹಾಕಿದ ಘಟನೆ ಸಂಬಂಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಹೇಳಿ, ರಕ್ಷಣೆ ಕೋರಿ ಯತ್ನಾಳ ಬೆಂಬಲಿಗ ಪ್ರಧಾನಿ ಕಛೇರಿಗೆ ದೂರು ನೀಡಿದ್ದಾರೆ.

ಬಿಜೆಪಿ ಶಾಸಕ ಯತ್ನಾಳ ವಿರುದ್ಧ ಹತ್ಯೆ ಮಾಡುವ ಬಹಿರಂಗ ಹೇಳಿಕೆ ನೀಡಿದರೂ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಆರೋಪಿಗಗಳನ್ನ ಬಂಧಿಸಿಲ್ಲ. ಹೀಗಾಗಿ ಶಾಸಕ ಯತ್ನಾಳ ಅವರ ಜೀವಕ್ಕೆ ಅಪಾಯವಿದೆ. ತುರ್ತಾಗಿ ರಕ್ಷಣೆ ನೀಡಬೇಕು ಹಾಗೂ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯತ್ನಾಳ ಬೆಂಬಲಿಗ ರಾಘವ ಅಣ್ಣೀಗೇರಿ ಪ್ರಧಾನಿ ಕಛೇರಿಗೆ ಸಾಮಾಜಿಕ ಜಾಲತಾಣದ ಮೂಲಕವೇ ದೂರು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!