ಪ್ರಜಾಸ್ತ್ರ ಸುದ್ದಿ
ಚೆನ್ನೈ: ನಿಜಕ್ಕೂ ಇದೊಂದು ಆಘಾತಕಾರಿ ಸುದ್ದಿ. ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬಂಧನಕ್ಕೆ ಆಗ್ರಹಿಸಿ ಅಭಿಯಾನ ಶುರು ಮಾಡಲಾಗಿದೆ. ಇದಕ್ಕೆ ಓರ್ವ ಯುವಕನ ಕೊಲೆ ಕಾರಣವಾಗಿದೆ. ಇದನ್ನು ಓದಿ ನಿಮಗೆ ಅಚ್ಚರಿ ಅನಿಸಬಹುದು.
ಸ್ಟಾರ್ ನಟರ ಅಭಿಮಾನಿಗಳ ವಾರ್ ಹೇಗೋ ಹಾಗೇ ಸ್ಟಾರ್ ಕ್ರಿಕೆಟ್ ಆಟಗಾರರ ಅಭಿಮಾನಿಗಳ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. 21 ವರ್ಷದ ಎಸ್.ಧರ್ಮರಾಜ್ ವಿರಾಟ್ ಕೊಹ್ಲಿ ಅಭಿಮಾನಿ, 24 ವರ್ಷದ ಪಿ.ವಿಘ್ನೇಶ್ ರೋಹಿತ್ ಶರ್ಮಾ ಅಭಿಮಾನಿ. ಕಳೆದ ಮಂಗಳವಾರ ರಾತ್ರಿ ಮದ್ಯೆ ಸೇವನೆ ಮಾಡುತ್ತಿರುವ ವೇಳೆ ಕೊಹ್ಲಿ-ಶರ್ಮಾ ನಡುವೆ ಯಾರು ಬೆಸ್ಟ್ ಅನ್ನೋ ಚರ್ಚೆ ನಡೆದಿದೆ. ಆಗ ವಿಘ್ನೇಶ್, ಆರ್ ಸಿಬಿ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಅಪಹಾಸ್ಯ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಧರ್ಮರಾಜ್, ಬಾಟಲ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೆ ಕಾರಣಕ್ಕೆ ರೋಹಿತ್ ಶರ್ಮಾ ಅಭಿಮಾನಿಗಳು ವಿರಾಟ್ ಕೊಹ್ಲಿ ಬಂಧನಕ್ಕೆ ಆಗ್ರಹಿಸಿದ್ದಾರೆ. ಅವರ ಅಭಿಮಾನಿಗಳಿಗೆ ನಾಚಿಕೆ ಆಗಲ್ಲವೆ ಎಂದಿದ್ದಾರೆ. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಅಭಿಮಾನಿಗಳ ನಡುವೆ ಮತ್ತೆ ವಾಗ್ವಾದ ನಡೆದಿದೆ. ಅಭಿಮಾನ ಅನ್ನೋದು ಅಂಧಕಾರಕ್ಕೆ ಹೋದರೆ ಏನಾಗುತ್ತೆ ಅನ್ನೋದಕ್ಕೆ ಅಮಾಯಕ ಜೀವ ಬಲಿಯಾಗಿದೆ.