ಗುಮ್ಮಟನಗರಿಯಲ್ಲಿ ಸಾವು ತಂದ ಪ್ರೀತಿ

233

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಗುಮ್ಮಟನಗಿರಯಲ್ಲಿ ಪ್ರೇಮಿಗಳಿಬ್ಬರು ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಸೆಪ್ಟೆಂಬರ್ 22ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಿಕೋಟ ತಾಲೂಕಿನ ಗೊಣಸಗಿಯ 20 ವರ್ಷದ ಮಲ್ಲಿಕಾರ್ಜುನ್ ಕೊಲೆಯಾದ ದುರ್ದೈವಿ.

ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಮಲ್ಲಿಕಾರ್ಜುನ್ ಬಸ್ಸಿನಲ್ಲಿ ಪರಿಚಯವಾಗಿದೆ. ಅಕ್ಕಪಕ್ಕದ ಊರಿನವರಾಗಿರುವುದರಿಂದ ಬಸ್ಸಿನಲ್ಲಾದ ಪರಿಚಯ ಸ್ನೇಹವಾಗಿದೆ. ಫೋನ್ ನಂಬರ್ ನಲ್ಲಿ ಮಾತುನಾಡುತ್ತಾ ಹೋದಂತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇದು ಗೊತ್ತಾಗಿ ಎರಡೂ ಮನೆಯವರು ಇಬ್ಬರನ್ನು ಬೇರೆ ಮಾಡಿದ್ದರು.

ಕಳೆದ ಸೆಪ್ಟೆಂಬರ್ 22ರಂದು ಗ್ರಾಮದ ಜಮೀನಿನಲ್ಲಿ ಹುಡಗಿ ಹಾಗೂ ಯುವಕ ಇಬ್ಬರು ಸಿಕ್ಕಿಬಿದಿದ್ದಾರೆ. ಇದನ್ನು ನೋಡಿದ ಮನೆಯವರು ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ಇದರಿಂದ ಹೆದರಿದ ಹುಡುಗಿ ಅಲ್ಲಿಯೇ ಇದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ಇದರಿಂದ ಸಿಟ್ಟಾದ ಆಕೆ ಪೋಷಕರು ಹುಡುಗನಿಗೂ ಕಿಟನಾಶಕ ಕುಡಿಸಿ ಹತ್ಯೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಸಾಕ್ಷಿ ನಾಶ ಪಡಿಸಲು ಎರಡು ಶವಗಳನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಸೆಪ್ಟೆಂಬರ್ 23 ನಸುಕಿನ ಜಾವ ಕೋಲ್ಹಾರ ಬಿಡ್ಜ್ ನಲ್ಲಿ ಎಸೆದು ಹೋಗಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಹುಡುಗಿಯ ಶವದ ಹುಡುಕಾಟ ನಡೆದಿದೆ. ಇದೀಗ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜಿತ್ ನನ್ನು ಬಂಧಿಸಲಾಗಿದೆ.

ಪ್ರಕರಣದ ದಿಕ್ಕು ತಪ್ಪಿಸಲು ಮಗಳು ಕಾಣೆಯಾಗಿದ್ದಾಳೆ ಎಂದು ತಿಕೋಟಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅತ್ತ ಹುಡುಗನ ಕಡೆಯುವರು ಸಹ ಕಾಣೆಯಾಗಿರುವ ಕುರಿತು ದೂರು ಸಲ್ಲಿಸಿದ್ದರು. ಈಗ ನೋಡಿದರೆ ಇಬ್ಬರ ಜೀವ ಹೋಗಿರವುದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!