ಅನುಮಾನಸ್ಪದ ರೀತಿಯಲ್ಲಿ ವೃದ್ಧ ಸಾವು

308

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಚಿನ್ನಕ್ಕಾಗಿ ವೃದ್ಧನ ಕಿವಿ ಕತ್ತರಿಸಿ ಬಳಿಕ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಪಿಎ ಗ್ರಾಮದಲ್ಲಿ ನಡೆದಿದೆ. ಮಡಿವಾಳಪ್ಪ‌ ಭೀಮರಾಯ ಪೂಜಾರಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ವೃದ್ಧನಾಗಿದ್ದಾನೆ.

ಮಡಿವಾಳಪ್ಪನನ್ನು ಹತ್ಯೆಗೈದು ನಂತರ ಆತ್ಮಹತ್ಯೆಯಂತೆ ಬಿಂಬಿಸುವ ಕೆಲಸ ದುಷ್ಕರ್ಮಿಗಳು ಮಾಡಿದ್ದಾರಂತೆ. ಬಲಗಡೆಯ ಕಿವಿ ಕತ್ತರಿಸಿ ಚಿನ್ನ ದೋಚಿಕೊಂಡು ಪರಾರಿಯಾಗಿದ್ದಾರಂತೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!