ಅದೊಂದು ಕಾರಣಕ್ಕೆ ಅಣ್ಣನನ್ನು ಕೊಂದ ತಮ್ಮ

337

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪರ: ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಅಣ್ಣನನ್ನು ತಮ್ಮ ಕೊಲೆ ಮಾಡಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಜಗ್ಗೇಶ್ ವಡ್ಡರ್ ಹತ್ಯೆಯಾದ ದುರ್ದೈವಿ.

ರಾಹುಲ್ ವಡ್ಡರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಹತ್ಯೆ ಕಾರಣವಾಗಿದ್ದು, ಅಣ್ಣ ಜಗ್ಗೇಶ್ ನಿತ್ಯ ಕುಡಿಯಲು ಹಣ ಕೇಳುತ್ತಿದ್ದ ಅನ್ನೋದು ಆಗಿದೆಯಂತೆ. ಅಣ್ಣನ ಕಾಟಕ್ಕೆ ಬೇಸತ್ತು ತಮ್ಮ ರಾಹುಲ್, ಹರಿತವಾದ ಆಯುಧದಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!