ಬೆಂಗಳೂರಲ್ಲಿ ಸೆ.9ರ ತನಕ ಮಳೆರಾಯನದ್ದೇ ಆರ್ಭಟ

136

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿ ಬಹುತೇಕ ನೆರೆ ಸಮಸ್ಯೆ ಎದುರಿಸುತ್ತಿದೆ. ಬೃಹತ್ ನಗರದಲ್ಲಿ ಎಲ್ಲಿ ನೋಡಿದರೂ ನೀರು ನುಗ್ಗಿ ಬರುತ್ತಿದೆ. ಮಳೆಯ ರುದ್ರನರ್ತನಕ್ಕೆ ಇಡೀ ನಗರದ ಜನತೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹಿಂದೆಂದೂ ಕಾಣದಂತಹ ಮಳೆಯಾಗಿದೆ.

ಪ್ರಜಾಸ್ತ್ರ ‘ಮುಳುಗುತ್ತಿದೆ ಬೆಂಗಳೂರು’ ಎಂದು ಆಗಸ್ಟ್ 31ರಂದೇ ಸುದ್ದಿ ಮಾಡುವ ಮೂಲಕ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿದೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ನಡೆದ ಅಕ್ರಮ, ಅವೈಜ್ಞಾನಿಕ ಕೆಲಸದಿಂದ ನಗರದಲ್ಲಿ ಸಾವು, ನೋವು ಸಂಭವಿಸುತ್ತಿವೆ.

ಪ್ರವಾಹ ಸೃಷ್ಟಿಯಾದರೆ ಏನಾಗಿರುತ್ತೆ ಅನ್ನೋ ಸಣ್ಣ ಅನುಭವ ಬೆಂಗಳೂರಿಗರಿಗೆ ಆಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಮಲೆನಾಡು ಭಾಗದಲ್ಲಿ ಆಗುವ ಪ್ರವಾಹದಂತೆ ಸಿಲಿಕಾನ್ ಸಿಟಿಯಲ್ಲಿ ಆಗಿದ್ದರೆ ಅದೆಷ್ಟು ಸಾವು ನೋವು ಸಂಭವಿಸುತ್ತಿದ್ದವೋ. ಪ್ರಕೃತಿಯ ವಿರುದ್ಧ ಸಾಗುತ್ತಿರುವ ಮನುಷ್ಯನಿಗೆ ಪ್ರಕೃತಿಯೇ ಪಾಠ ಕಲಿಸುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!