ಅಭಿಮನ್ಯು ಹೆಗಲಿಗೆ ಅಂಬಾರಿ

653

ಪ್ರಜಾಸ್ತ್ರ ಸುದ್ದಿ

ಮೈಸೂರು: ಕೋವಿಡ್ 19 ಸೋಂಕಿನ ಭೀತಿಯ ನಡುವೆ ಎರಡನೇ ಬಾರಿಗೆ ದಸರಾ ಹಬ್ಬದ ಸಿದ್ಧತೆಗಳು ನಡೆಯುತ್ತಿವೆ. ಕಳೆದ ಬಾರಿಯೂ ಸಹ ಕೋವಿಡ್ ಕಾರಣಕ್ಕೆ ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಆಚರಿಸಲಾಗಿದೆ. ಈ ಬಾರಿಯೂ ಅದೇ ರೀತಿ ಆಚರಣೆಗೆ ಸರ್ಕಾರ ಸಿದ್ಧತೆ ನಡೆಸಿದೆ.

ಅಕ್ಟೋಬರ್ 7ರಿಂದ 15ರ ತನಕ ದಸರಾ ಹಬ್ಬ ನಡೆಯಲಿದೆ. ಅರಣ್ಯ ಇಲಾಖೆ ಅಂಬಾರಿ ಹೊರುವ ಆನೆಯನ್ನು ಆಯ್ಕೆ ಮಾಡಿದ್ದು ಅಭಿಮನ್ಯು ಹೆಗಲಿಗೆ ಆ ಜವಾಬ್ದಾರಿ ಹೊರಿಸಲಾಗಿದೆ. ದಸರಾದಲ್ಲಿ 5 ಗಂಡಾನೆ, 3 ಹೆಣ್ಣಾನೆ ಸೇರಿ 8 ಗಜ ಪಡೆ ಇರಲಿದೆ. ಸೆಪ್ಟೆಂಬರ್ 13ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಗಜಪಡೆ ಪಯಣ ಶುರುವಾಗಿ, ಸೆಪ್ಟೆಂಬರ್ 16ರಂದು ಮೈಸೂರಿನ ಅಂಬಾವಿಲಾಸ ಅರಮನೆ ತಲುಪಲಿವೆ.




Leave a Reply

Your email address will not be published. Required fields are marked *

error: Content is protected !!