ಬೆಂಗಳೂರು: ಫೆಬ್ರವರಿ 9ರಂದು ನಗರದ ಮೇಖ್ರಿ ಸರ್ಕಲ್ ಬಳಿ ಸಂಭವಿಸಿದ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ರು ತೀವ್ರ ತನಿಖೆ ನಡೆಸಿದ್ದಾರೆ. ಈ ಕೇಸ್ ನ್ನ ತುಂಬಾ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ರು ಅಪಘಾತ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನ ಕಲೆ ಹಾಕಿದ್ದಾರೆ.
ಏರ್ ಪೋರ್ಟ್ ಬಳಿಯ ಟೋಲ್ ನಿಂದ ಆ್ಯಕ್ಸಿಡೆಂಟ್ ನಡೆದ ಮೇಖ್ರಿ ಸರ್ಕಲ್ ವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ್ದು, ಬೆಂಟ್ಲಿ ಕಾರಿನಲ್ಲಿ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಪ್ರಯಾಣಿಸಿದ್ದ ಅಂತಾ ಹೇಳಲಾಗ್ತಿದೆ. ಈ ಅಪಘಾತ ಪ್ರಕರಣ ಸಂಬಂಧ ಸದಾಶಿವ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದ್ರೆ, ಅಪಘಾತವಾದ ಕಾರಿನಲ್ಲಿ ನಾನು ಇರ್ಲಿಲ್ಲ ಮತ್ತು ಕಾರ್ ನಾನು ಡ್ರೈವ್ ಮಾಡಿಲ್ಲ ಅನ್ನೋದು ನಲಪಾಡ್ ವಾದ. ಹೀಗಾಗಿ ಅಪಘಾತವೊಂದು ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ತಿದೆ.