ಇಂದು ನಾಮಪತ್ರ ಪರಿಶೀಲನೆ, ಅಬ್ಬರದ ಪ್ರಚಾರ ಶುರು

126

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20ರಂದು ತೆರೆ ಬಿದ್ದಿದೆ. ಇಂದು ನಾಮಪತ್ರ ಪರಿಶೀಲನೆ ಕೆಲಸ ನಡೆಯಲಿದೆ. ಏಪ್ರಿಲ್ 24ರ ತನಕ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ.

ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಭರ್ಜರಿ ಮೆರವಣಿಗೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇನ್ನು ಸುಮಾರು 15 ದಿನಗಳ ಕಾಲ ಬೃಹತ್ ಸಭೆ, ಸಮಾರಂಭ, ಬಹಿರಂಗ ಸಮಾವೇಶಗಳು ನಡೆಯಲಿವೆ. ತಾಲೂಕು, ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ, ಬೂತ್ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ಪ್ರಚಾರ ನಡೆಸುವ ಮೂಲಕ ಮತ ಕೇಳಲಿದ್ದಾರೆ.

224 ಕ್ಷೇತ್ರಗಳಿಗೆ 5,102 ನಾಮಪತ್ರ ಸಲ್ಲಿಕೆಯಾಗಿವೆ. 3,632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೆ. ಎಷ್ಟು ಅಭ್ಯರ್ಥಿಗಳು ಹಿಂದಕ್ಕೆ ತೆಗೆದುಕೊಳ್ಳುತ್ತಾರೆ ಅನ್ನೋದು ಏಪ್ರಿಲ್ 24ರಂದು ತಿಳಿಯಲಿದೆ. ಮೇ 10 ಮತದಾನ ಹಾಗೂ ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.




Leave a Reply

Your email address will not be published. Required fields are marked *

error: Content is protected !!